ನಾಮಕರಣಕ್ಕೆಂದು ಕರೆಯಲು ಹೊರಟಾಗ.... ~ Nischal V Barki

Saturday, 25 January 2014

ನನ್ನ ಮುದ್ದಾದ ಕಂದ
ಸುಮಾರಾಗಿ ಒಂದುವರೆ ತಿಂಗಳಿನಿಂದ ನಾನು ನಿನ್ನ ಅಮ್ಮ ಇಬ್ಬರೂ ಚರ್ಚೆ ಮಾಡಿ ಒಂದ್ ತಿರ್ಮಾನಕ್ಕೆ ಬಂದೆವು ಅದರಂತೆಯೇ ದಿನಾಂಕ 24-01-2014 ರ ಶುಕ್ರವಾರ ಬೆಳಿಗ್ಗೆ ಬೇಗನೆ ಏದ್ದು ನನ್ನ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಗಾಡಿ ತೆಗೆದುಕೊಂಡು ಹೊರಟೆ ಸೀದಾ ಸಾಯಿ ಮಂದಿರಕ್ಕೆ ಭಗವಂತನ ದರ್ಶನ ಪಡೆದು ಸೀದಾ ಗಣೇಶ್ ಅಂಕಲ್ ಮನೆಗೆ ಬಂದು ಅವ್ರಿಗೆ ನಾಮಕರಣಕ್ಕೆ  ಬರುವ ಅಗತ್ಯೆತೆಯ ಬಗ್ಗೆ ಹೇಳಿದೆ ಏನೆಂದರೂ ಬಿಡಲೇ ಇಲ್ಲ ಕಾಫಿ ಕುಡಿಸಿದರು. ಅಲ್ಲಿಂದ  ನೇರವಾಗಿ ಪಾಲಾಕ್ಷಮ್ಮನವರ ಮನೆಯ ಮುಂದೆ ನಿಂತು ಅವರ ಮನೆಗಾಗಿ ಹುಡುಕಾಟ ಮಾಡಿದೆ ನಂತರ ಅಕ್ಕ ಪಕ್ಕದವರನ್ನ ಕೇಳಿದರೆ ನಮಗ್ಯಾರಿಗೂ ಗೊತ್ತಿಲ್ಲವೆಂದು ಹೇಳಿದರು ಹೀಗಾಗಿ ರಾಜೂಗೆ ಪೋನ್ ಮಾಡಿ ಬಾರಯ್ಯ ನಿಮ್ಮನೆ ತೊರಿಸೆಂದೆ ಅದೆಲ್ಲಿದ್ದನೋ ಏನೋ  ರಾಜು ಬಂದು ಇದೇ ಮಾಮ ನಮ್ಮನೆ ಅಂದ ಊಸ್.......ಫ್ ಅಂದೆ.

ಒಳಗೆ ಪಾಲಾಕ್ಷಮ್ಮ ಮತ್ತವರಮ್ಮ ಇದ್ದರು ಉಪ್ಪಿಟ್ಟು ತಿನ್ಲೇಬೆಕೆಂದು ಹೇಳಿದರು ಈಗಾಗಲೇ ತಿಂಡಿ ತಿಂದು ಬಂದಿದ್ದೆನಾದ್ದರಿಂದ ಹೊಟ್ಟೆ ಹಸಿಯದಿದ್ದರೂ ತಿನ್ನುವ ಶಿಕ್ಷೆ. ಆದರೂ ಸ್ವಲ್ಪ ಕಡಿಮೆ ಮಾಡಿಸಿ ಬಲವಂತವಾಗಿ ಉಪ್ಪಿಟ್ಟು ತಿನ್ನುವ ಶಿಕ್ಷೆ ಅನುಭವಿಸಿದೆ. ಕೊನೆಗೂ ಬರುವಂತೆ ಹೇಳಿ ಹೊರಗೆ ಬಂದೆ.

ಅಲ್ಲಿಂದ ಹೊರಟ್ಟಿದ್ದು ಯಶೊಧಳ ಮನೆಗೆ ವಿನೊಬನಗರ 3ನೇ ಮೇನ್ 10 ನೇ ಕ್ರಾಸ್ ಗೆ ಹೊದರೆ ಅಲ್ಲಿಯೂ ಮನೆ ಕನ್ ಪ್ಯೂಸ, ಯಾವುದಿರಬಹುದು ಅವರದ್ದು ಅಂತ ಯೊಚಿಸುತ್ತಲೇ ಅಲ್ಲಿದ್ದ ಹೆಣ್ಣುಮಕ್ಕಳನ್ನ ಕೇಳಿದರೆ ಗೊತ್ತಿಲ್ಲ....... ಗೊತ್ತಿಲ್ಲ....
ಯಶೋಧಳಿಗೆ ಪೋನ್ ಮಾಡಿ ಹೊರಗೆ ಬಾ ಎಂದು ಹೇಳಿದೆ ಕೊನೆಗೊ ಉಸ್ಸಾಪ್ಪಾ ಅಂದು ಅವಳ ಮಹಡಿ ಮನೆಗೆ ಕರೆದ್ಯೊಯ್ದಳು. ನಿಮ್ಮತ್ತೆ ಯಶೋಧಳಿಗೆ ನಿನ್ನ ನಾಮಕರಣಕ್ಕೆ ಬರುವಂತೆ ಹೇಳಿದೆ ಇಂದು ತಪ್ಪಿದರೆ ನಾಳೆ ನಿರ್ಮಲಾ ಬರುತ್ತಾಳೆ ನಿಮಗೆಂಥಹ ಬಟ್ಟೆಗಳು ಬೇಕೊ ಅಂಥಹವುಗಳನ್ನೇ ಆಯ್ದುಕೊಳ್ಳಿರೆಂದು ಹೇಳಿದೆ ನಿನ್ನ ಬಗ್ಗೆ ಕೇಳಿದಾಗ ನಾನು ದುಮ್ಮಿಕ್ಕುವ ನದಿಯಂತೆ ಪ್ರವಾಹವಾಗಿ ರಭಸದಿಂದ ಹರಿಯುವಂತೆ ನಿನ್ನ ತುಂಟಾಟಗಳನ್ನ ಬಣ್ಣಿಸಿತೊಡಗಿದೆ ನನ್ನ ಮಗ ಬಹದ್ದೂರ್ ಗಂಡು ಬಾರ್ಕಿ ಮಾಸ್ತರ್ ಅಂತೆಲ್ಲಾ ಹೇಳುತ್ತಾ ಸ್ವಲ್ಪವೇ ಹಾಲು ಕುಡಿದು ಮತ್ತೊಮ್ಮೆ ನನ್ನ ಮಗನ ನಾಮಕರಣ ಶಾಸ್ತ್ರವನ್ನ ಅತ್ಯಂತ ಶಾಸ್ತ್ರಬದ್ದವಾಗಿ ಮಾಡಿರೆಂದು ಹೇಳಿ ಅಲ್ಲಿಂದ ಕೆಳಗಿಳಿದು 

RTO ಆಪೀಸ್ ರಿಂಗ್ ರೋಡ್ ಬಳಸಿ ಗಿರಿಜವ್ವನ ಮನೆ ( ರೇಖಾಳ ಮನೆ) ಹುಡುಕುತ್ತಾ ಸಾಗಿದೆ ನಿನ್ನ ಎರಡನೇ ಅತ್ತಿಗೆ ಅವರ ಮನೆಯ ಬಳಿ ಬಟ್ಟೆಗಳನ್ನು ಬಿಸಿಲಿಗೆ ಹಾಕುತ್ತಲಿತ್ತು ನನ್ನ ನೋಡಿ ಒಂದು ಸ್ಮೈಲ್ ಕೊಟ್ಟೂ ಒಳಗೆ ಹೊರಟಿತು ನನಗೆ ಬೇಕಾಗಿದ್ದು ನನ್ನ ಅಕ್ಕನವರನ್ನ ನಿನ್ನ ನಾಮಕರಣಕ್ಕೆ ಕರೆಯುವ ಕರ್ತವ್ಯ ಅದೂ ಬಿಟ್ಟು ಅವರ ಪ್ರಸ್ತುತ ಜೀವನದ ಬಗ್ಗೆ ಬರೆಯುವದು ನನಗೆ ಸರಿಕಾಣುತ್ತಿಲ್ಲ ಹಾಗಾಗಿ ಅವರ ಜೀವನಕ್ಕೆ ಮತ್ತು ಅವರ ಮತ್ತು ನಮ್ಮ ವ್ಯವಹಾರಿಕ ಜೀವನ ಶೈಲಿಯ ಬಗ್ಗೆ ಅನೇಕ ವ್ಯತ್ಯಾಸಗಳಿದ್ದರೂ ಈಗ ಅವೆಲ್ಲಾ ಅನಾವಶ್ಯಕ ಮತ್ತು ಅಪ್ರಸ್ತುತ ಹೀಗಾಗಿ ನಂಜುಕಾರುವ ಮಾತುಗಳನ್ನ ನಿನ್ನ ಜೀವನ ಚರಿತ್ರೆಯಲ್ಲಿ ದಾಖಲಿಸುವ ಪ್ರಯತ್ನ ಮಾಡುವುದಿಲ್ಲ ಮಗನೆ.ಎಲ್ಲವನ್ನೂ ಕಾಲಕ್ಕೆ ಬಿಡುತ್ತೇನೆ.

ಒಂದು ಚೇರ್ ಮೇಲೆ ಕುಳಿತೆ ನಿನ್ನ ಎರಡನೇ ಅತ್ತೆ ಗಿರಿಜಾ ಬಾರ್ಕಿ ಗೆ ನಿನ್ನ ನಾಮಕರಣಕ್ಕೆ ಬರುವಂತೆ ಆಹ್ವಾನ ನೀಡಿದೆ, ನಿನ್ನ ಬಗ್ಗೆ ನಿನ್ನ ವಯಸ್ಸಿನ ಬಗ್ಗೆ ನಿನ್ನ ಲವಲವಿಕೆಯ ಬಗ್ಗೆ ನಿನ್ನ ತುಂಟಾಟಗಳ ಬಗ್ಗೆ ಕೇಳಿದಂತೆ ನಾನು ದಣಿವರಿಯದವನಂತೆ ಹೇಳುತ್ತಿದ್ದೆ. ನಿಮ್ಮ ಮನೆ ಮಂದಿಗಳಲ್ಲೆರೂ ಬನ್ನಿರೆಂದು ಹೇಳಿ ಅವರ ಮನೆಯಿಂದ ಹೊರಟೆ.

ಅಲ್ಲಿಂದ ಹೊರಟರೆ ಪೂಜಾರ್ ಮಂಜುಳಾರ ಮನೆಗೆ ನಿಜಕ್ಕೂ ನಾನೇ ನಂಬದಾದೆ ಅವರ ಮನೆಯ ಗುರುತು ಸಿಗುತ್ತಿರಲಿಲ್ಲ ಅಷ್ಟೊಂದು ವ್ಯತ್ಯಾಸವಾಗಿದೆ ಅವರ ಮನೆಯ ಮುಂದೆಯೇ ನಾಲ್ಕಾರು ಭಾರಿ ಓಡಾಡಿದರೂ ಗುರುತು ಪತ್ಯೆಯಾಗಲಿಲ್ಲ.

ಹಿಗೆಯೇ ಕೇಳುತಾ ಬರುತ್ತಿದ್ದಂತೆ ಒಂದು ಮನೆಯ ಒಳಗಿನಿಂದ ಒಬ್ಬ ಹುಡುಗಿ ತನ್ನ ನೀಳವಾದ ಮತ್ತು ದಟ್ಟವಾದ ಕೂದಲನ್ನ ಬಾಚಿಕೊಳ್ಳುತಿದ್ದ ದೃಶ್ಯ ಕಣ್ಣಿಗೆ ಕಾಣಿಸಿತು ಅವರ ಮನೆಯ ಬಾಗಿಲಲ್ಲಿ ನಿಂತು ಇಲ್ಲಿ ಪೂಜಾರ್ ವಿಜಯಪ್ಪನವರ ಮನೆ ಏಲ್ಲೆಂದೆ ಅದ್ದಕ್ಕವಳು ಕೈಯಿಂದ ಸೊನ್ನೆ ಮಾಡಿದಾಗ ಅವಳ ದಟ್ಟವಾದ ಕಪ್ಪು ಕೂದಲು
ಮಾರುದ್ದ  ಹರಡಿ ಜಲಪಾತದಂತೆ ಜಾರಿ ಬಿದ್ದಂತಾಯ್ತು. ನಿಜಕ್ಕೂ ಅವಳು ಅಪ್ರತೀಮ ಸುಂದರಿಯಂತೆ ಕಂಡಳು ಇಂಥಹ ಸಮಯದಲ್ಲಿಯೇ ಅವಳ ಪಕ್ಕಲ್ಲಿ ಶೇಖಾತ್ತೆ ಕಾಣಬೇಕಾ?..... 

ಅಯ್ಯೋ ಅತ್ತೇ ನಿನ್ನ ಮನೆಯಾ? ಅಂತ ಗಾಡಿಯಿಂದ ಕೆಳಗಿಳಿದು ಮನೆಯೊಳಗೆ ಹೋದೆ ಆ ಹುಡುಗಿ ಆಸ್ಪತ್ರೆಗೆ ತನ್ನ ಮಗುವನ್ನು ಕರೆದ್ಯೂಲು ಸಿದ್ದವಾಗುತ್ತಿದ್ದಳು ಅವಳು ಅತ್ತೆಯ ಮಗನ ಹೆಂಡತಿ ಎಂಬುದು ನೊಡುತಿದ್ದಂತೆ ತಿಳಿಯಿತು. ಶೇಖಾವತ್ತೆ ನನ್ನ ಕೈ ಹಿಡಿದು ಮಾತನಾಡಿಸಿತು ನೀನು ಹುಟ್ಟಿದ ವಿಷ್ಯ ತಿಳಿದು ತುಂಬಾನೇ ಖುಷಿಯಾಯ್ತು. ಥ್ಯಾಂಕ್ಸ ನೀಡಿ ಭಾಳ ಖುಷೀ ಆಯ್ತು ಯಂಕಣ್ಣ ಅಂದಿತು..... 

ನಾಮಕರಣಕ್ಕೆ ತಪ್ಪದೇ ಬನ್ನಿರೆಂದು ಹೇಳಿ ಪಕ್ಕದ ಮನೆಯ ನಿನ್ನ ಕೊನೆಯ ಅತ್ತೆ ಮಂಜುಳಾಳ ಮನೆಗೆ ಬಂದೆ ಅಲ್ಲಿ ಎಲ್ಲಿ ಕುಳಿತುಕೋಳ್ಳಬೇಕೆಂದು ತಿಳಿಯುತ್ತಿರಲಿಲ್ಲ ಯಾವುದೋ ಒಂದು ಮುರಿದ ಮಂಚದ ಮೇಲೆ ಕುಳಿತು ನಿನ್ನ ನಾಮಕರಣಕ್ಕೆ ಕರೆದೆ.. ನಿಮ್ಮತ್ತೆ ಬಾಯ್ ಮುಚ್ಚಿಕೊಂಡು ನಗುತ್ತಾ ಆಯ್ತು ಬರುತ್ತೇನೆಂದು ಹೇಳಿತು.

ಅಲ್ಲಿಂದ ಸೀದಾ ಐರಣಿಯತ್ತ ಪ್ರಯಾಣ ಬೆಳೆಸಿದೆ ಕೋಡಳ್ಳಿ ಹೊಲದಲ್ಲಿದ್ದ ನನ್ನ ಕೃಷ್ಣಮೂರ್ತಿ ಅಣ್ಣನ ಮನೆ ಅಲ್ಲಿಗೆ ನೇರವಾಗಿ ಹೊರಟೆ ಅಲ್ಲಿ ಅವನೇ ಇರಲಿಲ್ಲ ಮತ್ತು ದ್ಯಾಮಕ್ಕನೂ ಸಹ ಇರಲಿಲ್ಲ ಸ್ವಲ್ಪ ಹೊತ್ತು ಅಲ್ಲಿದ್ದ ಮಮತ ಜುಮ್ಮಿ ಮತ್ತು ಶರತ ರೊಂದಿಗೆ ಕಾಲ ಕಳೆದು ಐರಣಿಯ ಮನೆಯ ಕಡೆಗೆ ಹೊರಟೆ.

ಮನೆಯಲ್ಲಿ ಯಾರೂ ಇರಲಿಲ್ಲದ ಕಾರಣ ಸ್ವಲ್ಪ ಸಮಯ ಕುಳಿತೆ ರತ್ನವ್ವ ಬಂದಳು ಅವಳಿಗೆ ನಿನ್ನ ನಾಮಕರಣಕ್ಕೆ ಬರಲು ಆಹ್ವಾನ ನಿಡಿದೆ ಮತ್ತು ಅವಳೊಂದಿಗೆ ನಮ್ಮ ಮನೆಯ ಅಕ್ಕ ಪಕ್ಕದವರನ್ನ ಕರೆಯಲು ಹೊದೆ ಅಲ್ಲಿದ್ದವರಿಗೆಲ್ಲಾ ನಾಮಕರಣಕ್ಕೆ ಕರೆದು ಸೀದಾ ಹರಿಹರಕ್ಕೆ ಬಂದೆ ವಾಟರ್ ಸರ್ವೀಸ್ ನಲ್ಲಿರುವ ಗಂಗಣ್ಣನನ್ನು ಕರೆದು ಪಾರವ್ವನನ್ನು ಕರೆಯಲು ಆಶ್ರಯ ಕಾಲೋನಿಗೆ ಬಂದೆ ಹೊನ್ನಾಳಿಯ ನಿಮ್ಮ ತಾತನ ತಂಗಿ ರೇಣುಕಳನ್ನು ಮತ್ತು ಲಕ್ಷ್ಮೀಯವರನ್ನ ಕರೆದು ಅಲ್ಲಿಂದ ಪಾರವ್ವನ ಮನೆಗೆ ಬಂದರೆ ಮಾವ ಅದ್ಬುತವಾಗಿ ಪೂಜೆಯಲ್ಲಿ ನಿರತನಾಗಿದ್ದ ಅವನ ಪೂಜೆ ಮುಗಿಯುವ ತನಕ ಕಾದಿದ್ದು ಕುಳಿತೆ ಪೂಜೆ ಮುಗಿದಾದ ಮೇಲೆ ನಾನು ನನ್ನನ್ನೇ ಅವನಿಗೆ ಪರಿಚಯ ಮಾಡಿಕೊಂಡೆ ನಾನು ಐರಣಿ ಕೆಂಚವ್ವನ ಮಗ ವೆಂಕಟೇಶ್ ಅಂದೆ. ಹೋ.....ಬಾ ಅಳಿಯ ಒಳಗೆ ಅಂದ......ಆಡಿನ ಹಾಲಿನಲ್ಲಿ ವಾರೇವ್ಹಾ ಅನ್ನುವಂತಹ ಟೀ ಮಾಡಿಕೋಟ್ಟ ನಂತರ ಪಾರವ್ವ ತನ್ನ ಮಗಳ ಮನೆಗೆ ಆವರಗೆರೆಗೆ ಹೊಗಿದ್ದಾಳೆ ಪೋನ್ ಮಾಡು ಅಂದ.

ಹಲೋ.......ಯಾರಿದು?  ನಾನು ಮಂಜುಳ ಅಂದಿತು ಅತ್ತಲಿನ ದ್ವನಿ ಮಾಮ ನಾನು ಮಂಜುಳಾ ಪಾರವ್ವನ ಕೊನೆಯ ಮಗಳು ನಾನು ನಿನ್ನನ್ನು ತುಂಬಾನೇ ನೋಡಿದ್ದೇನೆಂದು ಹೇಳಿದಳು OK  ಆಯ್ತು ನಾಳೆ 02-02-2014ರ ಬಾನುವಾರ ನನ್ನ ಮಗನ ನಾಮಕರಣವಿದೆ ದಯವಿಟ್ಟು ತಪ್ಪಿಸದೇ ಬನ್ನಿ ಅಲ್ಲಿ ನಿಮ್ಮನ್ನ ನೊಡುತ್ತೇನೆಂದು ಹೇಳಿ ಗುತ್ತೂರಿಗೆ ಕೊಟ್ರವ್ವತ್ತೆಯನ್ನು ಕರೆಯಲು ಹೊರಟೆ.

ಗುತ್ತೂರು ಈಗ ತುಂಬಾನೇ ಬದಲಾಗಿದೆ ಅವರಿವರನ್ನ ಕೇಳಿಕೊಂಡು ನನ್ನತ್ತೆಯ ಮನೆಯನ್ನು ಪತ್ತೆ ಹಚ್ಚಿದಾಗ ರಾತ್ರಿ 9 ಆಗಿತ್ತು. ಅತ್ತೆಯ ಬಲಗಾಲಿಗೆ ಆಕಳು ಒದ್ದು ನೆಡೆಯದಂತಾಗಿ ಮಂಚದ ಮೇಲೆ ಕುಳಿತಿತ್ತು ನನ್ನ ಗುರುತು ಹಿಡಿದು ಮಾತನಾಡಿಸಿತು ಏನ್ ಯಂಕಣ್ಣ ಹೇಗಿದ್ದೀಯಾ? ಬಹಳ ಅಪರೂಪವಾಯ್ತಲ್ಲ ಏನ್ ಸಮಾಚಾರ? ಅಂತೆಲ್ಲಾ ಕೇಳಿತು.ಅತ್ತೆಗೆ ನಿನ್ನ ನಾಮಕರಣದ ಸುದ್ದಿ ಹೇಳಿದೆ ಸಮಯವಾಗಲೇ ವೀಪರೀತವಾಗಿದ್ದರಿಂದ ಅವರಿಂದ ಆರ್ಶಿವಾದ ಪಡೆದು ಕೊಡಿಯಾಲ ಹೊಸಪೇಟೆಗೆ ಬಂದೆ ನನ್ನ ತಮ್ಮನ ಮಾವ ಅತ್ತೆಯವರನ್ನ ನಾಮಕರನಕ್ಕೆ ಬನ್ನೀರೆಂದು ಹೇಳಿ ದಾವಣಗೆರೆಗೆ ಬಂದಾಗ ರಾತ್ರಿ 10-20 ಆಗಿತ್ತು ಮಲಗಿದೆ ಮನೆಯಲ್ಲಿ.

ದಿನಾಂಕ 26-01-2014 ನೇ ಬಾನುವಾರ ಮಧ್ಯಾನದವರೆಗೂ Shopನಲ್ಲಿದ್ದು ಯಾವುದೇ ಗಿರಾಕಿಗಳ ಸುಳಿವು ಇಲ್ಲದ ಕಾರಣ ನಾನು Shop Close ಮಾಡಿಕೊಂಡು ಹೊನ್ನಾಳಿಗೆ ನಿನ್ನ ನೋಡಲು ಬಂದೆ ಬಹಳಷ್ಟು ದಿನಗಳೇ ಆಗಿ ಹೊಗಿದ್ದವು ನಿನ್ನ ನೊಡಿ. ಮತ್ತು ಮಂಡಗದ್ದೆಯಲ್ಲಿರುವ ಶ್ವೇತಾಳನ್ನು ಕರೆಯಲು ಹೊರಟೆ ಶಿವಮೊಗ್ಗ ತಲುಪಿದಾಗ ಸಂಜೆ 3-30 ಆಗಿದ್ದರಬಹುದು ಶ್ವೆತಾಳ ಗಂಡ ಸುರೇಶ ಮತ್ತು ಅವನ  ತಮ್ಮ  ಕೌಶಿಕ್ ಖಾಸಗಿ ಬಸ್ ನಿಲ್ದಾಣದಿಂದ ಮಂಡಗದ್ದೆಯ ಅವರ ಮನೆಯ ವರೆಗೂ ಅವನೇ ಕಂಪನಿ ನೀಡಿದ.

ಬಸ್ ಇಳಿದ ತಕ್ಷಣ ಸುರೇಶರ ಮನೆಕಡೆ ಹೊರಟೆ ಜೊತೆಗೆ ಕೌಶಿಕ್ ಇದ್ದ. ಮನೆಗೆ ಬರುತ್ತಿದ್ದಂತೆ ನಾಗರಾಜರ ಮನೆಯವರು ನನ್ನನ್ನು ಕಂಡು ಓ....ಲಕ್ಷ್ಮಕ್ಕನ ಗಂಡ  ವೆಂಕಟೇಶ್  ಭಾವಾ......ಬನ್ನಿ ಬನ್ನಿ ಒಳಗೆ ಎಂದು ಕರೆಯುತ್ತಿದ್ದರು  ಹೊದೆ ಮನೆಯ ಒಳಗೆ ನಾಪತ್ತೆಯಾಗಿದ್ದಳು ಶ್ವೆತಾ?  ನನ್ನನ್ನೇ ಕೇಳುತ್ತಿದ್ದರು ಶ್ವೇತಾ ಎಲ್ಲಿ ಹೇಗಿದ್ದಾಳೆಂದು  ಅರೆರೇ......ಇದೇನಿದು ನನಗೆ ಕೇಳುತ್ತಿದ್ದಿರಿ ಅವಳಾಗಲೆ ಹೊನ್ನಾಳಿಯಿಂದ ಬಂದು ಮುರ್ನಾಲ್ಕು ದಿನಗಳೇ ಆದವಲ್ಲ....ಅಂದೆ, ಅವರೆಲ್ಲಾ ಅವರಿವರ ಮುಖ ನೋಡುತ್ತಾ ನಿಂತರು ಸ್ವಲ್ಪ ಸಮಯದ ಅವಧಿಯಲ್ಲಿ ಶ್ವೇತಾ ಮತ್ತು ಸುರೇಶ ಅವರ ಸ್ಕೂಟಿಯಲ್ಲಿ ಬಂದರು...

ಕುಡಿಯಲು ಹಾಲು ತಿನ್ನಲು ಬಾಳೆಹಣ್ಣು ಜೊತೆಗೆ ಸ್ವಲ್ಪ ಖಾರವನ್ನು ತಟ್ಟೆಯಲ್ಲಿಟ್ಟು ಕೊಟ್ಟಳು ಶ್ವೇತಾ.ಆಗ ಬಂತು ನೋಡು ಫೋನು ದಾವಣಗೆರೆಯಿಂದ ಪಲ್ಲವಿ ಕಡೆಯಿಂದ ನಿಮ್ಮಕ್ಕನವರು ಪಕ್ಕದವರ ಮನೆಯವರ ಹತ್ತಿರ ತುಂಬಾ ಜೋರಾಗಿ ಜಗಳ ಮಾಡುತ್ತಿದ್ದಾರೆ ಸ್ವಲ್ಪ ಹೇಳಿ ಅವರಿಗೆ ಸುಮ್ಮನ್ನಿರಲು ಅಂದ್ರು. ಅದ್ಯಾಕೆ ಜಗಳ? ಅಂದ್ರೆ ಮನೆಯ ಮುಂದೆ ಚರಂಡಿಯ ಮೇಲಿನ ಕಲ್ಲಿನ ಕೆಳಗೆ ಹಗ್ಗಣ ದೋರು ಮಾಡಿ ಮಣ್ಣನ್ನು ಅಗೆದು ಹೊರ ಹಾಕಿದ್ದರ ಪರಿಣಾಮ ನೀರು ಚರಂಡಿಯಲ್ಲಿ ಹರಿಯದೇ ಅಲ್ಲಿಯೇ ನಿಂತಿದ್ದರಿಂದ ಜಗಳ ಆರಂಭಗೊಂಡಿತ್ತು ಪಕ್ಕದ ಮನೆಯ ಲಲೀತಮ್ಮನವರ ಮಗಳು ಹೇಮಾಳೊಂದಿಗೆ ಈ ವಿಚಾರವಾಗಿ ನಾನು ಸ್ವಲ್ಪ ಗಲಿಬಿಲಿಗೊಂಡೆ.

ಶ್ವೇತಾಳ ಅತ್ತೆ ಮತ್ತು ಮನೆಯವರನ್ನ ನಿನ್ನ ನಾಮಕಣಕ್ಕೆಂದು ಕೆರೆದು ರಾತ್ರಿ 8.30ರ ಸುಮಾರಿಗೆ ಶಿವಮೊಗ್ಗಕ್ಕೆ ಬಂದೆ ನನ್ನ ಅದೃಷ್ಟ ರಂಗಣ್ಣ ಅಲ್ಲಿಯೇ ಇದ್ದನಾದ್ದರಿಂದ ರಂಗಣ್ಣ ಮತ್ತು ಅವರ ಚಿಕ್ಕಪ್ಪನವರ ಮಗ ಆನಂದನೊಂದಿಗೆ ಶಿವಮೊಗ್ಗದ ತುಂಬೆಲ್ಲಾ ಇರುವಂಥಹ ಸಂಭಂದಿಕರನ್ನ ಕರೆದು ರಾತ್ರಿ 12.30ಕ್ಕೆ ಹೊನ್ನಾಳಿಗೆ ಬಂದು ಮಲಗಿದೆ. ಹೀಗೆ ನಿನ್ನ ನಾಮಕರಣಕ್ಕೆಂದು ಕರೆಯಲು ಹೊದ ಪರಿ.

0 comments:

Post a Comment

Thank you so much